ದಾಸ್ ಸೂರ್ಯವಂಶಿ ಗೌರವ ಸನ್ಮಾನ

ದಾಸ್ ಸೂರ್ಯವಂಶಿ ಗೌರವ ಸನ್ಮಾನ
Kaliyugadkoogu
10 / 100

ಔರಾದ :ಸೆ.6: ಕರ್ನಾಟಕ ರಾಜ್ಯ ವಿಕಲಚೇತನ ನೂತನ ಆಯುಕ್ತರಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ತಮ್ಮ ತವರು ಕ್ಷೇತ್ರ ಔರಾದ್ ಗೆ ಆಗಮಿಸಿದ ದಾಸ್ ಸೂರ್ಯವಂಶಿ ಅವರಿಗೆ ಪಟ್ಟಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ಕಾಂಗ್ರೆಸ ಮುಖಂಡ ರಾಮಣ್ಣ ವಡಿಯಾರ ಅವರ ಕಚೇರಿಯಲ್ಲಿ ಅಭಿಮಾನಿಗಳು ಗೌರವ ಸನ್ಮಾನ ಮಾಡುವ ಮೂಲಕ ಸ್ವಾಗತಿಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಂಟಿ ದರಬಾರೆ ಹಾಗೂ ಶಿವರಾಜ್ ದೇಶಮುಖ್ ಮಾತನಾಡಿ
ದಾಸ್ ಸೂರ್ಯವಂಶಿಯವರು ಸುಮಾರು 3 ದಶಕಗಳಕಾಲ ವಿಕಲಚೇತನರ ಸೇವೆ ಮಾಡಿ ಅಂಧಕಾರದಲ್ಲಿರುವವರಿಗೆ ಬೆಳಕಿನೆಡೆಗೆ ಕೊಂಡೋಯ್ಯಲು ಇಡಿ ತಮ್ಮ ಜೀವನ ಮುಡುಪಾಗಿಟ್ಟು ಅವರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆಮಾಡಿದ್ದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿಕೆ ಶಿವಕುಮಾರ, ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಹಾಗೂ ಅರಣ್ಯ, ಪರಿಸರ ಜೀವ, ಬೀದರ್ ಜಿಲ್ಲಾಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹಿಂ ಖಾನ್ ಮತ್ತು ಕಾಂಗ್ರೆಸ್ ಸರಕಾರದ ಎಲ್ಲಾ ಸಚಿವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು,
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ
ಡಾ. ಫಯಾಜ್ ಅಲಿ, ರಹಿಂ ಮೌಲಿಸಾಬ್, ವಿಷ್ಣು ಶಿಂದೆ, ಶಿವಾಜಿರಾವ್ ಪಾಟೀಲ್ ಮುಧೋಳ್, ಅಂಜಾರೆಡ್ಡಿ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

sharadghante

Leave a Reply