1
1

ಬೀದರ್ ಆಗಸ್ಟ್ 13 (ಕಕ ವಾರ್ತೆ): ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಬೀದರ್ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ದಿನಾಂಕ 14-08-2026ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿಯಿಂದ ಭಾಲ್ಕಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಆಗಸ್ಟ್ 15ರ ಶನಿವಾರ ಬೆಳಿಗ್ಗೆ 8:45ಕ್ಕೆ ಬೀದರ್ಗೆ ಆಗಮಿಸಲಿರುವ ಸಚಿವರು, ಬೆಳಿಗ್ಗೆ 9 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಬೆಳಿಗ್ಗೆ 11:30ಕ್ಕೆ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆವರಣದಲ್ಲಿ ನೂತನ ಮಾಡುಲರ್ ಒಟಿ ಉದ್ಘಾಟನೆ ಮಾಡುವರು.
ಮಧ್ಯಾಹ್ನ 12:30ಕ್ಕೆ ರಂಗಮAದಿರದಲ್ಲಿ ಜಿಲ್ಲಾ ಕಲಾವಿದರಿಗೆ ಗುರುತಿನ ಚೀಟಿ ವಿತರಣೆ, ಮಧ್ಯಾಹ್ನ 1 ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಆಟೋ ಸೆಂಟರ್ ಉದ್ಘಾಟನೆ ಹಾಗೂ ತದನಂತರ ಮಧ್ಯಾಹ್ನ 3 ಗಂಟೆಗೆ ರಸ್ತೆ ಮೂಲಕ ಹೈದರಾಬಾದ್ಗೆ ನಿರ್ಗಮಿಸಲಿದ್ದಾರೆ.
Subscribe to get the latest posts sent to your email.