Popular Posts

ಕಪೀಲ ಹೂಗಾರ ಗಾದಗಿ ಪದಗ್ರಹಣ ಸಮಾರಂಭ ಆ.13ಕ್ಕೆ

ಬೀದರ: ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ (ರಿ.), ಬೆಂಗಳೂರು ಜಿಲ್ಲಾ ಘಟಕ ಬೀದರ ವತಿಯಿಂದ ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಪೀಲ ಹೂಗಾರ ಗಾದಗಿ ಅವರ ಪದಗ್ರಹಣ ಸಮಾರಂಭ ಆ.13ರಂದು ಬೆಳಿಗ್ಗೆ 11.15ಕ್ಕೆ ನಗರದ ಚಿದ್ರಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಪರಮ ಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ರಾಜ್ಯ ಗೌರವಾಧ್ಯಕ್ಷರು, ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ (ರಿ.), ಬೆಂಗಳೂರು ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಸಂಘದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಹೂಗಾರ ಸಮಾಜದ ಬೀದರ ಜಿಲ್ಲಾಧ್ಯಕ್ಷ ಚಂದ್ರಕಾಂತ ಹೂಗಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹೂಗಾರ ಸಮಾಜದ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಹಣಮಂತಪ್ಪ ಹೂಗಾರ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹೂಗಾರ ಸಮಾಜ ಬೆಂಗಳೂರು ರಾಜ್ಯ ಮಹಿಳಾಧ್ಯಕ್ಷೆ ಭಾರತಿ ಶ್ರೀಶೈಲ ಬುಯ್ಯಾರ, ಬೀದರದ ವಕೀಲ ಹಾಗೂ ಸಮಾಜದ ಮುಖಂಡ ರವಿಕಾಂತ ಹೂಗಾರ ಬೆಳಕೇರಾ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಮಾರುತೆಪ್ಪ ಹೂಗಾರ ಹಾಗೂ ಶ್ರೀಮತಿ ಶ್ರೀದೇವಿ ಬಸವರಾಜ ಹೂಗಾರ ಪಾಲ್ಗೊಳ್ಳಲಿದ್ದಾರೆ.
ಹೂಗಾರ ಸಮಾಜ ಬೀದರ ದಕ್ಷಿಣ ಅಧ್ಯಕ್ಷ ಶ್ರೀನಿವಾಸ ಹೂಗಾರ ಸ್ವಾಗತಿಸಲಿದ್ದು, ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದು ಫುಲಾರಿ ಹಾಗೂ ಮಹಿಳಾ ಸಹ ಕಾರ್ಯದರ್ಶಿ ಶ್ರೀಮತಿ ಪರಿಮಳಾ ಹೂಗಾರ ನಿರೂಪಣೆ ಮಾಡಲಿದ್ದಾರೆ. ಬೀದರ ನಗರಾಧ್ಯಕ್ಷ ಸತೀಶ ಹೂಗಾರ ಮೀನಕೇರಾ ವಂದನಾರ್ಪಣೆ ಸಲ್ಲಿಸಲಿದ್ದಾರೆ.
ಪದಗ್ರಹಣ ಸಮಾರಂಭಕ್ಕೆ ಹೂಗಾರ ಸಮಾಜದ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕೋರಿದ್ದಾರೆ


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading