1
1

ಬೀದರ : ಯಾವುದೇ ಆಯುಧಗಳಿಲ್ಲದೆ ತನ್ನöನ್ನು ತಾನು ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಕರಾಟೆ ತಾಲೀಮು ಕಲಿಯುವುದು ಅತ್ಯ ಅವಶ್ಯಕವಾಗಿದೆ ಎಂದು ಬ್ಯಾ÷್ಲಕ್ ಬೆಲ್ಟ ವಿಜೇತ ತುಕಾರಾಮ ನುಡಿದಿದ್ದಾರೆ.
ನಿನ್ನೆ ದಿನಾಂಕ ೦೮-೦೨-೨೦೨೫ ರಂದು ಕೆ.ಇ.ಬಿ.ಎದುರು ಇರುವ ಬಡವಾಣೆಯ ಹನುಮಾನ ಮಂದಿರದ ಆವರಣದಲ್ಲಿ ಕೃಷ್ಣಾ ಮಾರ್ಷಲ್ ಆರ್ಟ ಸ್ಕೂಲ್ ಬೀದರ ವತಿಯಿಂದ ಆಯೋಜಿಸಿದ ಕರಾಟೆ ಕಲಿಯುವ ವಿದ್ಯಾರ್ಥಿಗಳಿಗಾಗಿ ಬೆಲ್ಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ತುಕರಾಮ ಮೇಲಿನಂತೆ ನುಡಿದಿದ್ದಾರೆ.
ಕರಾಟೆ ಕಲಿಯುವುದರಿಂದ ದೈಹಿಕವಾಗಿ ಮನುಷ್ಯ ಸದೃಢನಾಗುತ್ತಾನಲ್ಲದೆ ಮಾನಸಿಕವಾಗಿ ಆತ್ಮ ವಿಶ್ವಾಸ ಹೆಚ್ಚುತ್ತದೆ.ಸುಮಾರಿತನ ಮಾಯಾವಾಗಿ ಕ್ರಿಯಾಶೀಲತೆ ಮನೆ ಮಾಡುತ್ತದೆ. ಅತಿಥಿಗಳಾಗಿ ಆಗಮಿಸಿದ ಪ್ರಾಧ್ಯಾಪಕ ಸಾಹಿತಿ ಬಸವರಾಜ ಮಯೂರು ನುಡಿದಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೃಷ್ಣ ವಹಿಸಿ ವಿವಿಧ ಬೆಲ್ಟ್ ವಿಜೇತರು : ಎಲೋ ಬೆೆಲ್ಟ್ ಅದ್ವಿತ್ , ಪ್ರಣವ, ಲಕ್ಷಿö್ಮÃ, ಗ್ರಿನ್ ಬೆಲ್ಟ್, ಐಶ್ವರ್ಯ , ಪ್ರೀತಿ ಅಥರ್ವ ಆರೆಂಜ್ ಬೆಲ್ಟ್ ಅಥರ್ವ, ಸಾಕ್ಷಿ , ನಿಸರ್ಗ, ಬ್ಲೂ ಬೆಲ್ಟ ಕೇದರ್ , ಪ್ರಣವ, ವಿಶೇಷ, ಅನನ್ಯ, ಅವರುಗಳಿಗೆ ವಿತರಿಸಿದರು.
ಕಾರ್ಯಕ್ರಮದ ಸಂಚಾಲನೆಯನ್ನು ಅಭಿಷೇಕ ಮಾಡಿದರು, ವಂದನಾರ್ಪಣೆ ಶ್ರೀಮತಿ ಮಂಜುಳಾ ಮಯೂರ್ ಮಾಡಿದರು
Subscribe to get the latest posts sent to your email.