1
1

ಕಲಬುರಗಿ:- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ವತಿಯಿಂದ ವಿಶ್ವ ಬ್ಯಾಂಕ್ ನೆರವಿನ ಕೇಂದ್ರ ಪುರಸ್ಕೃತ ಮಹತ್ವಾಕಾಂಕ್ಷಿ ಖಂಒP ಯೋಜನೆಯಡಿ ಅಂತಿಮ ವರ್ಷದ ತಾಂತ್ರಿಕ ವಿದ್ಯಾರ್ಥಿಳಿಗಳಿಗಾಗಿ ಒಂದು ದಿನದ Iಟಿಛಿubಚಿಣioಟಿ ಕಾರ್ಯಾಗಾರವನ್ನು ಕರ್ನಾಟಕ-ಜರ್ಮನ್ ತಾಂತ್ರಿಕ ತರಬೇತಿ ಕೇಂದ್ರ, (ಏಉಖಿಖಿI), ಕಲಬುರಗಿಯಲ್ಲಿ ಯಶ್ವಸಿಯಾಗಿ ಹಮ್ಮಿಕೊಳ್ಳಲಾಯಿತು ಸದರಿ ಕಾರ್ಯಾಗಾರವನ್ನು ಫೌಜಿಯಾ ತರನ್ನುಮ್ ಬಿ., ಜಿಲ್ಲಾಧಿಕಾರಿಗಳು, ಕಲಬುರಗಿ ರವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳು Iಟಿಛಿubಚಿಣioಟಿ ಕಾರ್ಯಾಗಾರದ ಸದುಪಯೋಗ ಪಡೆಯಬೇಕು, ಕಲಬುರಗಿ ಜಿಲ್ಲೆಯ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ Iಟಿಛಿubಚಿಣioಟಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯು Iಟಿಛಿubಚಿಣioಟಿ ಊub ಆಗಿ ಹೊರಹೊಮ್ಮಲಿದೆ ವೆಂದು ಆಶಯ ವ್ಯಕ್ತಪಡಿಸಿದರು. ಶ್ರೀ ಅಬ್ದುಲ್ ಅಜೀಮ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ಇವರು ಖಂಒP ಯೋಜನೆ ಮತ್ತು Iಟಿಛಿubಚಿಣioಟಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶ್ರೀ ರಾಜೇಶ ಬಾವಗಿ, ನಿರ್ದೇಶಕರು, ಕೆ.ಜಿ.ಟಿ.ಟಿ.ಐ, ಕಲಬುರಗಿ ಇವರು Iಟಿಛಿubಚಿಣioಟಿ ದಿಂದ ತಾಂತ್ರಿಕ ವಿದ್ಯಾರ್ಥಿಗಳಿಗೆ ಅವರ ನವೋದ್ಯಮ (Sಣಚಿಡಿಣ-uಠಿ) ಪ್ರಾರಂಭಿಸಲು ಅನುಕೂಲವಾಗಲಿದೆ ವೆಂದು ಹೇಳಿದರು. ಕಾರ್ಯಾಗಾರದಲ್ಲಿ ಶ್ರೀ ರಾಘವೇಂದ್ರ ಆರ್.ಪಿ, ಪ್ರಾಚಾರ್ಯರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಡಾ|| ಚಂದ್ರಕಾಂತ ಚಂದಾಪೂರ, ಶಾಖಾ ವ್ಯವಸ್ಥಾಪಕರು, ಕೆ.ಎಸ್.ಎಫ್.ಸಿ, ಶ್ರೀ ಸಯ್ಯದ್ ಅಶ್ಫಾಕ್ ಅಹ್ಮದ್, ಹಿರಿಯ ತರಬೇತಿದಾರರು, ಸಿಡಾಕ್, ಸಹಾಯಕ ನಿರ್ದೇಶಕರುಗಳಾದ ಕು.ರುಪಾಲಿ ಶೇರಖಾನೆ, ಶ್ರೀ ಜಾಫರ್ ಖಾಸಿಮ್ ಅನ್ಸಾರಿ ಮತ್ತು ಇನ್ನಿತರ ಹಾಗೂ ಸುಮಾರು 130 ವಿದ್ಯಾರ್ಥಿಗಳು ಹಾಜರಿದ್ದರು. ನವೋದ್ಯಮದಾರರಾದ ಶ್ರೀ ಪ್ರವೀಣ್ ಕುಮಾರ ಡಿಗ್ಗೆ ಇವರು ತಮ್ಮ ಅನುಭವವನ್ನು ಹಂಚಿಕೊಂಡಿದರು.